CreamA Cream article
Article

ಕಬ್ಬು ಬೆಳೆಗಾರರ ಪರವಾಗಿ ಸತತ 7 ಗಂಟೆ ಸಭೆ ನಡೆಸಿ ರೈತರ ಪರ ಖಚಿತವಾಗಿ ನಿಂತ ಸರ್ಕಾರ 

ಕನ್ನಡ ನಾಡು

 

ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ತಲಾ 50ರೂ ಸೇರಿಸಿ ರೈತರಿಗೆ ಟನ್ ಗೆ 3300 ಕೊಡಲು ತೀರ್ಮಾನ: ಸಿ.ಎಂ ಘೋಷಣೆ 

ಬೆಳಗಾವಿ DC ಜೊತೆಗೆ ಆದ ಒಪ್ಪಂದದ ಮೊತ್ತ 3200ರೂ ಜೊತೆಗೆ 100ರೂ ಸೇರಿಸಿ 3300ರೂ ಕೊಡಲು ತೀರ್ಮಾನ: ಸಿಎಂ 

ಈ ಮೊತ್ತ ಕಟಾವು ಮತ್ತು ಸಾಗಣಿಕೆ ವೆಚ್ಚ ಹೊರತುಪಡಿಸಿದ್ದಾಗಿರುತ್ತದೆ: ಸಿ.ಎಂ

ಕೇಂದ್ರದಿಂದ ಕಾರ್ಖಾನೆ ಮಾಲೀಕರಿಗೆ-ರೈತರಿಗೆ ಇಬ್ಬರಿಗೂ ಅನ್ಯಾಯ: ಇಬ್ಬರನ್ನೂ ಒಳಗೊಂಡು ಕೇಂದ್ರಕ್ಕೆ ನಿಯೋಗ: ಸಿಎಂ ಹೇಳಿಕೆ

ಬೆಂಗಳೂರು ನ7: ಬೆಳಗಾವಿಯಲ್ಲಿ ಪ್ರತಿಭಟನಾನಿರತ ಕಬ್ಬು ಬೆಳೆಗಾರರು
ಮತ್ತು ರೈತ ಸಂಘಟನೆಗಳ ಪರವಾಗಿ ಸತತ 7 ಗಂಟೆಗಳ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಪರ ಖಚಿತ ನಿಲುವು ತೆಗೆದುಕೊಂಡು, ಟನ್ ಕಬ್ಬಿಗೆ 3300 ರೂ ಕೊಡಲು ನಿರ್ಧರಿಸಿದೆ. 

ಸತತ ಏಳು ಗಂಟೆಗಳ ನಿರಂತರ ಸಭೆ ಬಳಿಕ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ನಿರ್ಧಾರ ಪ್ರಕಟಿಸಿದರು. 

Read More